Kannada rajyotsava wishes in kannada ಜಗತ್ತಿನ ಲಿಪಿಗಳ ರಾಣಿ ನಮ್ಮ ಕನ್ನಡ. ಪ್ರತಿ ವರ್ಷ ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಇದು 1956 ರಲ್ಲಿ ದಕ್ಷಿಣ ಭಾರತದ ಎಲ್ಲಾ ಕನ್ನಡ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಕರ್ನಾಟಕ ರಾಜ್ಯವನ್ನು ರೂಪಿಸಿದ ದಿನವನ್ನು ನೆನಪಿಸುತ್ತದೆ.
Table of Contents
ನಾವು ಕೇವಲ ನವೆಂಬರ್ ಕನ್ನಡಿಗರಾಗದೇ, ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ಕನ್ನಡದಲ್ಲೇ ಮಾತನಾಡುತ್ತೇನೆ, ಬರೆಯುತ್ತೇನೆ, ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ, ಕನ್ನಡೇತರರಿಗೆ ಕನ್ನಡ ಕಲಿಸುತ್ತೇನೆ, ಕನ್ನಡ ನುಡಿ , ಸಂಸ್ಕೃತಿ, ಪರಂಪರೆ ಉಳಿಸಲು ಸದಾ ಬದ್ಧರಾಗಿರುತ್ತೇವೆ ಎಂದು ಇದೇ ವೇಳೆ ಪ್ರಮಾಣ ಮಾಡೋಣ.
ಗಾಂಚಲಿ ಬಿಡಿ ಕನ್ನಡ ಮಾತನಾಡಿ.. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಎಲ್ಲಾದರು ಇರು, ಎಂತಾದರು ಇರು… ಎಂದೆಂದಿಗು ನೀ ಕನ್ನಡವಾಗಿರು’ ಎಂಬ ಕವಿವಾಣಿಯಂತೆಯೇ ಬದುಕೋಣ. ಕರುನಾಡಿನ ಕೀರ್ತಿಯ ಪತಾಕೆಯನ್ನು ಎಲ್ಲೆಲ್ಲೂ ಹಾರಿಸೋಣ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
ಕನ್ನಡಾಂಬೆಯ ಸೇವೆಗೆ ನಮ್ಮ ಬದುಕನ್ನು ಮುಡಿಪಾಗಿಡೋಣ. ಕನ್ನಡ ಬೆಳೆಸೋಣ, ಕನ್ನಡ ಕಲಿಸೋಣ. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
ಕಲಿಯೋಕೆ ಕೋಟಿ ಭಾಷೆ,
ಆಡೂಕೇ ಒಂದೆ ಭಾಷೆ,
ಕನ್ನಡ.. ಕನ್ನಡ.. ಕಸ್ತೂರಿ ಕನ್ನಡ…ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು..
ಎಷ್ಟು ಸಲ ಜನ್ಮವೆತ್ತಿದರೂ ಕನ್ನಡದ ಮಣ್ಣಲ್ಲೇ ಹುಟ್ಟಬೇಕು ಎಂದು ಪ್ರಾರ್ಥಿಸೋಣ. ಕನ್ನಡದ ಸಂಭ್ರಮದ ಹಬ್ಬಕ್ಕೆ ಎಲ್ಲರಿಗೂ ಹಾರ್ದಿಕ ಶುಭಾಶಯಗಳು
ಮನದೊಳಗೆ ಕನ್ನಡ ಮನಸ್ಸೊಳಗೂ ಕನ್ನಡ ಕನ್ನಡವೇ ಎಲ್ಲಾ ಕನ್ನಡವಿಲ್ಲದೇ ಬೇರೇನೂ ಇಲ್ಲ ನಮ್ಮ ತಾಯಿ ಭಾಷೆ ಕನ್ನಡ ಸರ್ವರಿಗೂ ಕನ್ನಡ ರಾಜ್ಯೋತ್ಸವ ಶುಭಾಶಯಗಳು
ಹಸಿರಾಗಲಿ ಕರ್ನಾಟಕ,
ಉಸಿರಾಗಲಿ ಕನ್ನಡ,
ತಾಯಿ ಕನ್ನಡಾಂಬೆಗೆ ಜಯವಾಗಲಿಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಕನ್ನಡದ ಕಂಪು ಎಲ್ಲೆಡೆ ಹರಡಲಿ
ಕನ್ನಡಿಗನೆಂಬ ಛಾಪು ಎಲ್ಲೆಡೆ ಮೂಡಲಿ
ಕನ್ನಡತನ ಎಲ್ಲರಲ್ಲೂ ಪಸರಿಸಲಿಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು..
ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ, ಕನ್ನಡ ಗೋವಿನ ಓ! ಮುದ್ದಿನ ಕರು ಕನ್ನಡತನವೊಂದಿದ್ದರೆ ನೀ ಅಮ್ಮಗೆ ಕಲ್ಪತರು
ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಭಾಷಾವಾರು ರಾಜ್ಯಗಳ ಉದಯ
ಸ್ವತಂತ್ರ ನಂತರ ಭಾಷಾವಾರು ರಾಜ್ಯಗಳ ಉದಯ ಭಾಷಾವಾರು ಆಧಾರದ ಮೇಲೆ ಸ್ವತಂತ್ರ ರಾಜ್ಯವನ್ನು ಪಡೆಯುವ ಪ್ರಯತ್ನದಲ್ಲಿ ಪೊಟ್ಟಿ ಶ್ರೀರಾಮುಲು 1952 ರಲ್ಲಿ ಆಮರಣಾಂತ ಉಪವಾಸ ಮಾಡಿ ಕೊನೆ ಉಸಿರು ಎಳೆದ ನಂತರ , ಆಂಧ್ರ ರಾಜ್ಯದ ತೆಲುಗು ಮಾತನಾಡುವ ಪ್ರದೇಶವನ್ನು 30 ನವೆಂಬರ್ 1953 ರಂದು ಮದ್ರಾಸ್ ರಾಜ್ಯದಿಂದ ಬೇರ್ಪಡಿಸಿ ಆಂಧ್ರ ರಾಜ್ಯ ಉದಯವಾಯಿತು
ಇದಕ್ಕೂ ಮೊದಲು ಮಧುಸೂದನ್ ದಾಸ್ ಪ್ರಯತ್ನದಿಂದ 1936 ರಲ್ಲಿ ಒಡಿಶಾ ರಾಜ್ಯ ಭಾಷಾವಾರು ಆಧಾರದ ಮೇಲೆ ರೂಪುಗೊಂಡ ಭಾರತದ ಮೊದಲ ರಾಜ್ಯ ಮತ್ತು ಪ್ರಾಂತವಾಯಿತು. ಒಡಿಶಾದಲ್ಲಿ ಭಾಷಾ ಚಳುವಳಿ 1895 ರಲ್ಲಿ ಪ್ರಾರಂಭವಾಯಿತು ಮತ್ತು ಬಿಹಾರ,ಒಡಿಶಾ ಪ್ರಾಂತ್ಯದಿಂದ ಪ್ರತ್ಯೇಕಿಸಲ್ಪಟ್ಟಿತು ಪ್ರಾಂತ್ಯದ ಬೇಡಿಕೆ ನಂತರದ ವರ್ಷಗಳಲ್ಲಿ ತೀವ್ರಗೊಂಡಿತು.
ನವೆಂಬರ್ 1, 1956 ರಂದು ರಾಜ್ಯಗಳ ಮರುಸಂಘಟನೆ ಕಾಯ್ದೆಯನ್ನು ಅಂಗೀಕರಿಸಿದಾಗ ಕರ್ನಾಟಕ ರಾಜ್ಯವನ್ನು ಸ್ಥಾಪಿಸಲಾಯಿತು. ಇದನ್ನು ಮೂಲತಃ ಮೈಸೂರು ರಾಜ್ಯ ಎಂದು ಕರೆಯಲಾಗುತ್ತಿತ್ತು. 1973 ರಲ್ಲಿ, ಮುಖ್ಯಮಂತ್ರಿ ಡಿ.ದೇವರಾಜ ಅರಸರು ಇದನ್ನು “ಕರ್ನಾಟಕ” ಎಂದು ಮರುನಾಮಕರಣ ಮಾಡಿದರು.
ಕರ್ನಾಟಕ ಇತಿಹಾಸ
ಮೊದಲಿಗೆ ಕರ್ನಾಟಕ ರಾಜ್ಯವನ್ನು ಮೈಸೂರು ರಾಜ್ಯ ಎಂದು ಕರೆಯಲಾಗುತ್ತಿತ್ತು . 1956 , ನವೆಂಬರ್ 1 ರಂದು ಕನ್ನಡ ಮಾತನಾಡುವ ಎಲ್ಲ ಪ್ರದೇಶಗಳನ್ನು ಸೇರಿಸಿ ಕರ್ನಾಟಕ ರಾಜ್ಯವೆಂದು ಘೋಷಿಸಲಾಯಿತು. ಈ ದಿನವನ್ನು ಕನ್ನಡ ರಾಜ್ಯೋತ್ಸವ ದಿನವೆಂದು ಆಚರಿಸಲಾಗುತ್ತದೆ. ಇದನ್ನು ಕರ್ನಾಟಕ ಸಂಸ್ಥಾಪನಾ ದಿನ ಎಂತಲೂ ಕರೆಯುತ್ತಾರೆ.
ಹೀಗಾಗಿ, ಕನ್ನಡ ಮಾತನಾಡುವ ಪ್ರದೇಶಗಳಲ್ಲಿ ಈ ದಿನವನ್ನು ಅತ್ಯಂತ ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಪ್ರತಿ ವರ್ಷ, ಕನ್ನಡಿಗರು ಒಟ್ಟುಗೂಡಿ, ರಾಜ್ಯ ಧ್ವಜವನ್ನು ಹಾರಿಸುವ ಮೂಲಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ, ಮೆರವಣಿಗೆಗಳಲ್ಲಿ ಭಾಗವಹಿಸುವ ಮತ್ತು ರಾಜ್ಯೋತ್ಸವ ಪ್ರಶಸ್ತಿಗಳ ವಿತರಣೆಯ ಮೂಲಕ ಈ ದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ.
ಕರ್ನಾಟಕದ ರಾಜ್ಯಪಾಲರು ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ ಮತ್ತು ರಾಜ್ಯೋತ್ಸವ ಪ್ರಶಸ್ತಿಗಳನ್ನು ಘೋಷಿಸುತ್ತಾರೆ. ರಾಜ್ಯೋತ್ಸವ ಪ್ರಶಸ್ತಿಗಳು ರಾಜ್ಯದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.
ರಾಜ್ಯದಲ್ಲಿ ಉತ್ತಮ ಬದಲಾವಣೆಯನ್ನು ತರಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದ ಗಣ್ಯ ವ್ಯಕ್ತಿಗಳಿಗೆ ಅವುಗಳನ್ನು ನೀಡಲಾಗುತ್ತದೆ.
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಜ್ಞಾನಪೀಠ ಪ್ರಶಸ್ತಿಗಳು
ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಕುವೆಂಪು 1967 ರಲ್ಲಿ. ಜ್ಞಾನಪೀಠ ಪ್ರಶಸ್ತಿ ಪಡೆದ ಇತರೆ ಕನ್ನಡಿಗ ಸಾಹಿತಿಗಳ ಪಟ್ಟಿ ಹೀಗಿದೆ
ವರ್ಷ | ಹೆಸರು | ಕೃತಿ |
---|---|---|
1967 | ಕುವೆಂಪು ( ಕೆ.ವಿ. ಪುಟ್ಟಪ್ಪ) | ಶ್ರೀ ರಾಮಾಯಣ ದರ್ಶನಂ |
1973 | ದ. ರಾ. ಬೇಂದ್ರೆ | ನಾಕುತಂತಿ |
1977 | ಶಿವರಾಮ ಕಾರಂತ | ಮೂಕಜ್ಜಿಯ ಕನಸುಗಳು |
1983 | ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ:- ಚಿಕವೀರ ರಾಜೇಂದ್ರ (ಗ್ರಂಥ) |
1990 | ವಿ. ಕೃ. ಗೋಕಾಕ | ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ ಭಾರತ ಸಿಂಧುರಶ್ಮಿ |
1994 | U.R ಅನಂತಮೂರ್ತಿ | ಸಮಗ್ರ ಸಾಹಿತ್ಯಕ್ಕೆ ಕೊಡುಗೆ |
1998 | ಗಿರೀಶ್ ಕಾರ್ನಾಡ್ | ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ನಾಟಕಗಳು ಯಶಸ್ವಿ |
2010 | ಚಂದ್ರಶೇಖರ ಕಂಬಾರ | ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ |
ನುಡಿ ಕನ್ನಡ, ನಡೆ ಕನ್ನಡ, ಅಕ್ಷರ ಅಕ್ಷರದಲ್ಲಿ ಅರಿವು ಕನ್ನಡ..
ಎಲ್ಲಾ ಕನ್ನಡಿಗರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು..
ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ -ಕುವೆಂಪು
ಹಚ್ಚೇವು ಕನ್ನಡದ ದೀಪ ಕರುನಾಡ ದೀಪ ಸಿರಿನುಡಿಯ ದೀಪ ಒಲವೆತ್ತಿ ತೋರುವ ದೀಪ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಚಿರಕಾಲ ಬೆಳಗಲಿ ಕನ್ನಡದ ದೀಪ ಜನಕೆಲ್ಲ ಬೆಳಕಾಗಿ ಪುಣ್ಯಪ್ರದೀಪ ಭಾರತಕೆ ಬಲವಾಗಿ ಭವ್ಯದೀಪ ಕಳೆಯುತ್ತ ತಾಪ ಬೆಳೆಸುತ್ತು ಸೈಪ ಹೊತ್ತಿತ್ತೋ ಹೊತ್ತಿತ್ತು ಕನ್ನಡದ ದೀಪ
ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಯಾವುದು ಸರಿ
“ಕನ್ನಡ ರಾಜ್ಯೋತ್ಸವ” ಮತ್ತು “ಕರ್ನಾಟಕ ರಾಜ್ಯೋತ್ಸವ” ಎರಡೂ ಸರಿಯಾದ ಪದಗಳು, ಆದರೆ ಅವುಗಳ ಬಳಕೆಯು ಸಂದರ್ಭ ಮತ್ತು ವೈಯಕ್ತಿಕ ಆದ್ಯತೆಯನ್ನು ಅವಲಂಬಿಸಿರುತ್ತದೆ.
“ಕನ್ನಡ ರಾಜ್ಯೋತ್ಸವ” ಕನ್ನಡ ಭಾಷೆ, ಸಂಸ್ಕೃತಿ ಮತ್ತು ಅಸ್ಮಿತೆಯ ಆಚರಣೆಯ ಮೇಲೆ ಕೇಂದ್ರೀಕರಿಸುತ್ತದೆ. ಇದು ಕನ್ನಡ ಭಾಷೆಯ ಮಹತ್ವ ಮತ್ತು ಅದರ ಶ್ರೀಮಂತ ಪರಂಪರೆಯನ್ನು ಎತ್ತಿ ತೋರಿಸುತ್ತದೆ.
“ಕರ್ನಾಟಕ ರಾಜ್ಯೋತ್ಸವ” ವ್ಯಾಪ್ತಿ ವಿಸ್ತಾರವಾಗಿದೆ, ಏಕೆಂದರೆ ಇದು ಕನ್ನಡ ಭಾಷೆಯನ್ನು ಮಾತ್ರವಲ್ಲದೆ ಇಡೀ ಕರ್ನಾಟಕ ರಾಜ್ಯವನ್ನು ಆಚರಿಸುತ್ತದೆ. ಇದು ವಿವಿಧ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಟ್ಟುಗೂಡಿಸಿ ನವೆಂಬರ್ 1, 1956 ರಂದು ಸ್ಥಾಪನೆಯಾದ ಕರ್ನಾಟಕ ರಾಜ್ಯದ ರಚನೆಯನ್ನು ಸೂಚಿಸುತ್ತದೆ.